ವಿವಿಧತೆಯಲ್ಲಿ ಏಕತೆ ???
ಇದು ನಿಜವೇ ? ನಾವು ನಮ್ಮ ದೇಶದಲ್ಲಿ ವಿವಿಧತೆಯಲ್ಲಿ ಏಕತೆ ಇದೆ ಎಂದು ಹೇಳಿಕೊಳ್ಳುತ್ತೇವೆ. ಆದರೆ ಇದು ನಿಜವೆ?
ನಮ್ಮ ದೇಶದಲ್ಲಿ ನಮ್ಮ ವಿವಿಧ ಭಾಷೆಯಿದೆ, ಸಂಸ್ಕೃತಿಯಿದೆ. ಇದು ನಿಜವಾಗಿ ದೇಶದ ಬೆಳವಣಿಗೆ ಪೂರಕವಗಿದೆಯೆ ? ಭಾರತದ ದಕ್ಷಿಣ ರಾಜ್ಯಗಳು ದಿನವೂ ಜಗಳವಾಡುತ್ತಿವೆ. ಇದು ಕೇವಲ ರಾಜಕೀಯವೋ ಅಥವಾ ಜನರ ಅಭಿಪ್ರಾಯವೂ ಹೌದೆ ? ಕರ್ನಾಟಕ ತನ್ನ ಸುತ್ತ ಇರುವ ಎಲ್ಲಾ ರಾಜ್ಯಗಳ ಜತೆ ಯಾವುದಾದರೊಂದು ವಿಷಯಕ್ಕೆ ಸಂಬಂಧವನ್ನು ಹಾಳು ಮಾಡಿಕೊಂಡಿದೆ. ಗೋವದ ಜೊತೆ ಮಹಾದಾಯಿ ವಿಷಯಕ್ಕೆ, ತಮಿಳುನಾಡಿನೊಂದಿಗೆ ಕಾವೇರಿ ವಿಷಯಕ್ಕೆ, ಆಂಧ್ರದ ಜತೆಗೆ ಕೃಷ್ಣೆಯ ವಿಷಯಕ್ಕೆ. ಮಹಾರಾಷ್ಟ್ರದ ಜತೆಗೆ ಸ್ವಾತಂತ್ರ್ಯ ಬಂದಾಗಿಂದಾಗಲು ಬೆಳಗಾವಿ ವಿಷಯಕ್ಕೆ…. ಇನ್ನು ಕೇರಳದ ಜತೆ ಇದ್ದಿದ್ದರಲ್ಲಿ ಸ್ವಲ್ಪ ವಾಸಿ. ಬಹುಶಃ ಕಾಸರಗೋಡು ಮುಂದೆ ಅದಕ್ಕೆ ಕಾರಣವಾಗಬಹುದು.
ಏಕೆ ಕರ್ನಾಟಕ ಹೀಗೆ ? ಇಲ್ಲಿ ನಮ್ಮ ಸುತ್ತ ಇರುವ ರಾಜ್ಯಗಳು ಕರ್ನಾಟಕಕ್ಕೆ ಅನ್ಯಾಯ ಮಾಡುತ್ತಿವೆಯೇ ??? ಅಥವಾ ಕನ್ನಡಿಗರಲ್ಲೇ ಏನೋ ಕೊರತೆ ಇದೆಯೇ ?? ಕನ್ನಡಿಗರಲ್ಲಿ ಏನಾದರೋ ಒಂದು Insecurity feeling ಇದೆಯಾ ??
ಬಹುಶಃ ಭಾರತವನ್ನು ಭಾಷೆಯ ಆಧಾರದಲ್ಲಿ ವಿಂಗಡಿಸಿದ್ದೆ ತಪ್ಪಾಯಿತೆ ? ಇಡೀ ಭಾರತದಲ್ಲಿ ಕೇವಲ ಒಂದೆ ಭಾಷೆ ಇದ್ದಿದ್ದರೆ ಎಷ್ಟು ಚೆನ್ನಾಗಿರುತ್ತಿತ್ತಲ್ವೆ ? ಈ ದಿನಾ ನಡೆಯುವ ಜಗಳ, ಉಚ್ಛ ನ್ಯಾಯಲಯದ ಹೋರಾಟಗಳು ನಡೆಯುತ್ತಿರಲಿಲ್ಲ ಅಲ್ಲವೆ ? ನಮ್ಮ ನದಿಗಳು ಕೇವಲ ಒಂದೇ ರಾಜ್ಯದಲ್ಲಿ ಹರಿದಿದ್ದರೆ ಚೆನ್ನಾಗಿರುತ್ತಿತ್ತು ಅಲ್ವೆ ? ಕಾವೇರಿ ಎಷ್ಟು ಚೆನ್ನಾಗಿರುತ್ತಿತ್ತಲ್ಲವೆ ? ಕನ್ನಡ ಮೇಲೋ ? ತಮಿಳು ಮೇಲೋ ಅಥವಾ ತೆಲುಗು ಮೇಲೋ ವಿಷಯಗಳೇ ಇರುತ್ತಿರಲಿಲ್ಲ. ನಾವೆಲ್ಲ ಎಷ್ಟು ಸ್ವಾರ್ಥಿಗಳಾಗಿದ್ದೇವೆ ಅಲ್ಲವೆ ? ಎಲ್ಲವೂ ನಮಗೇ ಬೇಕು ಎನ್ನುವ ಮನೋಭಾವ ಏತಕ್ಕೆ ? ನಾವು ಮೇಲು ಎಂಬ ವಿಷಯ ಏಕೆ ?
ಈ ತರಹದ ಜಗಳಗಳು ಕೇವಲ ನಮ್ಮ ಭಾರತದಲ್ಲೇ ಇವೆಯೆ? ಅಥವಾ ಜಗತ್ತಿನ ಬೇರೆ ದೇಶಗಳಲ್ಲೂ ಇವೆಯೆ ?
ಈ ಎಲ್ಲಾ ಪ್ರಶ್ನೆಗಳಿಗೆ ನನಗೆ ಉತ್ತರ ತಿಳಿಯುತ್ತಿಲ್ಲ. ನಮ್ಮ ದೇಶದಲ್ಲಿರುವ Regionalism ನಮ್ಮ ದೇಶವನ್ನು ಒಡೆಯುತ್ತಿವೆ… ಬಹುಶಃ ನಾವು ನಮ್ಮ ದೇಶವನ್ನು “ವಿವಿಧತೆಯಲ್ಲಿ ಏಕತೆ” ಎಂಬುದನ್ನು ಹೇಳುವುದನ್ನು ನಿಲ್ಲಿಸಬೇಕಷ್ಟೆ !
No comments yet
Leave a reply